
ಈ ದೇಹವೇ ರಥ.ದೇಹದ ಪರಿಕ್ರಮಣ ಅಂದರೆ,ನಿತ್ಯ ಸಂಚಾರವೇ ರಥೋತ್ಸವ.ರಥದಲ್ಲಿ ದೇವರನ್ನು ಪ್ರತಿಷ್ಠೆ ಮಾಡುವುದು ಎಂದರೆ ಭಕ್ತಿಯ ಪರಾಕಾಷ್ಠ.ಅದರ ಸಾಕಾರವೇ ರಥೋತ್ಸವ.
ರತ್ನ ಸ್ವಯಂ ಪ್ರಕಾಶವುಳ್ಳದ್ದು. ಅಂತೆಯೇ ಚೇತನ (ಚೈತನ್ಯ)ವೂ ಸ್ವಯಂ ಪ್ರಕಾಶವುಳ್ಳದ್ದು. ನವರತ್ನ ಎಂಬುದು ನವವಿಧ ಭಕ್ತಿಯ ಸಂಕೇತ, ಸಂದೇಶ. ರಥೋತ್ಸವ ಎಂಬುದು ಸಾಮೂಹಿಕ ಪೂಜೆ. ರಥೋತ್ಸವದಿಂದ ಸಮಾಜದಲ್ಲಿ ಭಾವೈಕ್ಯತೆ ಸಾಧ್ಯ. ರಥಾರೂಢನಾದ ಭಗವಂತನ ರಥವನ್ನು ಎಲ್ಲರೂ ಒಂದಾಗಿ ಗೋವಿಂದ ನಾಮಸ್ಮರಣೆಯೊಂದಿಗೆ ಎಳೆದಾಗ ಅಲ್ಲಿ ಭಕ್ತಿಯ ತನ್ಮಯತೆ ಮೈದಳೆಯುತ್ತದೆ. ಮೇಲು- ಕೀಳೆಂಬ ಭಾವ ಅಳಿಯುತ್ತದೆ. ಸಮಾಜದಲ್ಲಿ ಅನ್ಯೋನ್ಯತೆ ಬೆಳೆಯುತ್ತದೆ. ಅದರಿಂದ ಭಕ್ತರಿಗೆ ಧನ್ಯತೆಯ ಭಾವ ಉದಯಿಸುತ್ತದೆ.
ಸಂಯುಕ್ತ ಕರ್ನಾಟಕ: 23-12-2009ರಲ್ಲಿ ಪ್ರಕಟ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ